ಯುದ್ಧ

ಗೋರಿಗಳಿಗೆ ಜಾಗವಿಲ್ಲವೆಂದಲ್ಲ
ನೋವು ರೋಗರುಜಿನಗಳಿಗೆಲ್ಲ
ಹಡಗು ತುಂಬಿದ ಔಷಧಿ ತೇಲುವುದು
ಯುದ್ಧ ಭಯಂಕರ
ಹಾಸಿಹೊದ್ದ ಇರಾಕದ
ಮರುಭೂಮಿಯ ಮೇಲೆ
ಬುಷ್‌ನ ಬೂಟು ಸದ್ದು
ಸದ್ದಾಮನ ಗುಡುಗು ಮಿಂಚು
ಬುಷ್‌ನ ಲೇಸರ್ ಕಣ್ಣೊಳಗೆ
ಸದ್ದಾಮನ ಸದ್ದಡಗಿಸುವ ಹೊಳಪು
ಯುದ್ಧದ ಕಾರ್ಮೋಡುಗಳು
ಎಲ್ಲೋ ನುಗ್ಗುತ ಹಿಗ್ಗುತ
ತಮ್ಮೆದೆಯ ಭಿತ್ತಿಯೊಳು
ಏನೆಲ್ಲ ಅಚ್ಚುಹಾಕುವ ಚಡಪಡಿಕೆ.

ಬಾಗ್ದಾರ್ ಬಾಸ್ರಾದ ತುಂಬೆಲ್ಲ
ಹೆಣಗಳ ರಾಶಿ ತೈಲಬಾವಿಗಳ ಬೆಂಕಿ
ಆಕಾಶವೇ ಛಿದ್ರಿಸಿ ನೆಲನಡುಗಿಸುವ
ನೀರು ನೆತ್ತರವಾಗಿ
ಗಾಳಿ ಬೆಂಕಿಯಾಗಿ
ಮಾತೆಲ್ಲ ಚಿತ್ಕಾರ
ಅನಾಥರ ಎದೆ ಕಣ್ಣುಗಳ ಆಕ್ರಂದನಕೆ
ಮತ್ತೆ ಮತ್ತೆ ಬಾಂಬು ಗುಂಡು
ಬಂಕರ್ ಕಳಚಿಬೀಳುವ ಸದ್ದು
ಎದೆಗುಂಡಿಗೆ ಒಡೆದು
ಎದುರಾಗುವ ದುರಾದೃಷ್ಟ.
*****
ಪುಸ್ತಕ: ಇರುವಿಕೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮತಾಂತರ ಅಂತ ಹೊಯ್ಕಳ್ಳಿಕತ್ತಾರೆ ಪೇಜಾವರ
Next post ನೀ ಸಿಗದೆ ನಾನೆಂತು ತಿಳಿವೆನೇ ನನ್ನ?

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys